ಕಿಡಿ

ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ
ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು
ಸಿಡಿಯುತ ನುಡಿಗಳು ಸುಳಿರಾಗವುಗುಳೆ
ಒಡಲುರಿಯೆಂದಿತು ಧರಣಿಯು ಹೊರಳಿ
ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು
ಚಿಗಿಯಿತು ಕವಿಮನದಾಶೆಯ ಕಿಚ್ಚು

ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ್ಣದಲಿ
ಮುನ್ನದ ಮೋಹಿಸಿ ಮಹಿಯು ಮೈ ಮರೆಯೆ
ವನ್ಹಿ ರೂಪೋತ್ಕರ ಜ್ವಾಲೆಯು ಹರಿಯೆ
ಎನ್ನೊಡಲಾಶೆಯು ದಹಿಸಿತು ಧರೆಯ
ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು!
ಸೊಗಸಿತು ಕಿಚ್ಚಿದು! ಕಿಡಿಗಳು ಹೆಚ್ಚು!

ಮತ್ತೊಂದ ಸೆರೆಯಿಟ್ಟೆ ಕರಿಗಲ್ಲಿನಲ್ಲಿ
ಒತ್ತುವ ತೇಜ ತಥಾಗತ ಮೂರ್ತಿ!
ಮುತ್ತುತ ಜನ ಬಂದು ಮಣಿದರು! ಅಲ್ಲಿ
ಹತ್ತೊಂದು ಹೃದಯವನಾಳಿತು ಮೂರ್ತಿ!
ಚಿಗಿ, ಚಿಗಿ, ಚಿಗಿಯಿತು ಕವಿಮನದಾಶೆ!
ಚಿಗಿಯುತ ಸುಳಿಯಿತು ಧರಣಿಯ ಸೋಸಿ

ಅಂಡ ಪಿಂಡಾಂಡವನೆನ್ನೊಳು ಕಂಡೆ
ಕಂಡೆನು ತಾಂಡವ ಲಾಸ್ಯವ ಕಂಡೆ!
ನಿಂದೆನು ಕಾಲಪ್ರವಾಹವ ದಾಂಟಿ
ಇಂದು ನಾನಾಗಿಹೆ ಭುವನಕೆ ನೆಂಟ
ಚಿಗಿಯಿತು ಕವಿಮನದಾಶೆಯ ಗುಟ್ಟು
ಸೊಗಸುವ ಕಾಂತಿಯ ಧರಣಿಗೆ ಕೊಟ್ಟು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪದಗಳೊಂದಿಗೆ ನಾನು
Next post ೮೮, ಫೆಭ್ರವರಿ ೩

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys